ಆನಿ ಬಂತಾನಿ

ಚಿತ್ರ: ಆಂಡ್ರಿ ಸಂತಾನ
ಚಿತ್ರ: ಆಂಡ್ರಿ ಸಂತಾನ

ಆನಿ ಬಂತಾನಿ
ಯವೂರಾನಿ?
ಸಿದ್ಧಾಪುರದಾನಿ
ಇಲ್ಲಿಗ್ಯಾಕ್ ಬಂತು?
ಹಾದಿ ತಪ್ಪಿ ಬಂತು
ಹಾದಿ ಯಾಕೆ ತಪ್ಪಿತು?
ಕಬ್ಬಿನಾಸೆ ಎಳೆಯಿತು
ಬಾಲ ಬೀಸಿಕೊಂಡು ಊರ
ನಡುವೆ ಬಂದು ಬಿಟ್ಟಿತು?

ಪುಟ್ಟ ಪುಟ್ಟ ಕಣ್ಣು
ಮುಖವೊ ತಟ್ಟೆ ಹೊನ್ನು
ಮುಕ್ಕಿ ಬಿಡಬೇಕೆನಿಸುವಂಥ
ಕಸಿ ಮಾವಿನ ಹಣ್ಣು;
ಹುಡುಗರೆಲ್ಲ ಬನ್ನಿರೊ
ಕಾಯಿ ಬೆಲ್ಲ ತನ್ನಿರೊ
ಅಕ್ಕಿಬುಟ್ಟಿ ಮುಂದೆ ಇಟ್ಟು
ತಿನ್ನೊ ಮುದ್ದು ಎನ್ನಿರೊ,
ಕಾಯಿಬೆಲ್ಲ ತಿನ್ನುತ
ಚೋಟು ಬಾಲ ಬೀಸುತ
ಮೊರದ ಕಿವಿ ಬಡಿಯುವಾಗ
ಆನೆಗೆ ಜೈ ಅನ್ನಿರೊ.

ಅಲ್ಲ ಅಂಥಿಂಥಾನೆ
ವೆಂಕಟರಮಣ ತಾನೆ
ನಮ್ಮ ಪ್ರೀತಿ ಮೆಚ್ಚಿ
ಮನಸ ನಮಗೆ ಬಿಚ್ಚಿ
ಹೀಗೆ ಬಂದಿದ್ದಾನೆ
ಸೇವೆ ಕೊಳುತಿದ್ದಾನೆ
ಮರಳುಗಾಡಿನಂಥ ಬದುಕ
ಸ್ವರ್ಗ ಮಾಡಿದ್ದಾನೆ.

(“ಆನೆ ಬಂತಾನೆ, ಯಾವೂರಾನೆ” ಎಂಬ ಸಾಲಿನಿಂದ ಆರಂಭವಾಗುವ ಹಿಂದಿನ ಗೀತೆಯೊಂದ್ದಿದ್ದು ಅದು ನಾಲ್ಕೈದು ಸಾಲುಗಳಷ್ಟೇ ಉಳಿದಿದೆ.  ಆ ಸಾಲುಗಳನ್ನು ಸೇರಿಸಿಕೊಂಡು ಮುಂದಕ್ಕೆ ಈ ಇಡೀ ಪದ್ಯ ರಚಿಸಲಾಗಿದೆ.)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೯೮
Next post ಒಬ್ಬರಿಗಿಂತ ಒಬ್ಬರು ಮಿಗಿಲು

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

cheap jordans|wholesale air max|wholesale jordans|wholesale jewelry|wholesale jerseys